Posts

Showing posts from December, 2021

ಮನದಲ್ಲಿ ಮನೆಮಾಡಿದ ಪಾತ್ರಗಳು!

Image
                  ಕೆಲವೊಂದು ಕಲೆಗಳೇ ಹಾಗೆ.. ಬಯಸಿಯೂ, ಬಯಸದೆಯೂ ಶಾಶ್ವತವಾಗಿ ಉಳಿದು ಬಿಡುವವು!ಹಲವು ಬಾರಿ ಕಲೆಗಳಿಂದ ವಿಮುಕ್ತ ಲಾಗಳೆಂದು ಕಲೆ ತೊಲಗಿಸಲು ಹೋದಾಗ ಇರಲಿ ಬಿಡು ಎಂದು ಪಾಪ ಪ್ರಜ್ಞೆಯೆಂಬ ಗಾಯಕ್ಕೆ ನೆನಪೆಂಬ ಉಪ್ಪು ಸುರಿವ ಯತ್ನ!                 ಬೆಂಕಿಯಲ್ಲಿ ನಡೆದರೆ ಕಾಲು ಸುಡುವುದೆಂಬ ನಿಯಮದ ವಿರುದ್ಧ ನಾನು ತೆಗೆದುಕೊಳ್ಳುವ ಹುಚ್ಚು ಹೆಜ್ಜೆಗಳು! ಆದರೂ ಸುಡುವು ದಂತು ಖಚಿತ...ಕೆಲವೊಮ್ಮೆ ಪಾದ ಇನ್ನೂ ಕೆಲವೊಮ್ಮೆ ಮನಸ್ಸು..ಇವಕ್ಕೆಲ್ಲ ಸೂತ್ರ ಧಾರ ಮನದಲ್ಲಿ ಮನೆಮಾಡಿದ ಪಾತ್ರಗಳು..ಪಾತ್ರಧಾರಿ ದಾರಿತಪ್ಪಿದ ಮನಸ್ಸು..                ಕೆಲವೊಮ್ಮೆ ಈ ಪಾತ್ರಗಳು ಎಲ್ಲವೂ ಒಂದರಂತೆ ಕಾಣುವ ಬಹುಆಯ್ಕೆಯ ಪ್ರಶ್ನೆಯ ಉತ್ತರಗಳಂತೆ..ಆರಿಸುವುದು ಬಹು ಕಠಿಣ... ಮನೆಮಾಡಿದ ಎಲ್ಲ ಪಾತ್ರಗಳಿಗೂ ಅನ್ಯಾಯವಾಗದೆ ಸತ್ಕರಿಸುವ ಹುಚ್ಚು ಹೆಬ್ಬಯಕೆ!             ಈ ಪಾತ್ರಗಳು ಬಂದು ನೆಲೆಸಲು ನಾವೇ ಆಸ್ಪದವಾದೆವಾ? ಅಥವಾ ಆ ಪಾತ್ರಗಳ ಸೃಷ್ಟಿ ಕರ್ತರು ನಾವುಗಳಾ? ಎಲ್ಲದಕ್ಕೂ ಉತ್ತರ ಎಂದಿಗೂ ಸಿಗದು.. ಕೆಲವೊಮ್ಮೆ ಈ ಪಾತ್ರಗಳ ನಡುವೆ ನಿರಂತರ ಕದನ ಮೇಲುಗೈ ಸಾಧಿಸಲು.. ತೀರ್ಮಾನಿಸಲಾಗದೆ ಕೈ ಕೊಳೆ ಕಟ್ಟಿ ಕುಳಿಸಿದಂತ ತೀ...

ನಾನಾರು?...ಹುಡುಕಲೇ ಹೊರಗೆ?

Image
             ನಾನೊಬ್ಬ ದಿನಗೂಲಿ ನಾವಿಕನಂತೆ! ಎರಡು ದಡಗಳ ನಡುವಿನ ಪಯಣ ... ಆ ಪಯಣಗಳಲ್ಲಿ ಸರಿಯಾಗಿ ಬೆರೆಯದೆ ಪಸರಿಸುವ ಅದೆಷ್ಟೋ ಬಣ್ಣಗಳು! ಅದನ್ನೆಲ್ಲ ಮೈ ಸೋಕಿಸಿಕೊಂಡು ತನ್ನನ್ನು ತಾನೇ ಮರೆತು ಜೀವಂತ ಶವದಂತೆ ಬದುಕುವ ನಾನು! ಕೊನೆಗೂ ಪ್ರಯತ್ನ ನಿರಂತರ ಎಂಬಂತೆ ಮೈ ಕೊಳೆ ತೊಳೆದರೂ ಎಲ್ಲೋ ಸೆರೆಸಿಕ್ಕ ಸೈನಿಕ ನಂತಿರುವ ಸುಪ್ತ ಮನಸ್ಸಿನ ಸ್ನಿಗ್ಧ ಭಾಗಗಳು!                 ಬಹುಶಃ ಎಂದಿಗೂ ನಿಖರವಾದ ಉತ್ತರ ಸಿಗದ ಪ್ರಶ್ನೆ ಎಂದರೆ ಅದು ನಾನ್ಯಾರೆಂದು! ಕೆಲವೊಮ್ಮೆ ಬೆಳಕ ಹಿಡಿದು ಹೊರಗೆ ಹಂಚಿ ಚೂರಾಗಿರುವ ವ್ಯಕ್ತಿ ಗಳ ಮನದಲ್ಲಿ ನೆಲೆಸಿರುವ ನನ್ನ ವ್ಯಕ್ತಿತ್ವಗಳ ಹುಡುಕಿ ತರಲೇ ಎಂಬ ಅಸಹಾಯಕತೆ! ನನ್ನನ್ನೇ ನಾನು ಕಂಡುಕೊಳ್ಳುವ ಪ್ರಯತ್ನ ಅವಿರತ!                ಕೆಲವೊಮ್ಮೆ ತಳವಿಲ್ಲದ ತಳಮಳವೆಂದೆನಿಸಿದರೂ ಭಾಗಶಃ ಅನಿಸಿಕೆಯೇ ತಪ್ಪೆಂಬ ಹಿಂಜರಿಕೆ ಯೊಂದು ನನ್ನಲ್ಲೇ ಟಿಸಿಲೊಡೆದಿತ್ತು! ಇನ್ನೂ ಹಲವೊಮ್ಮೆ ಬಹುಶಃ ನನ್ನಂತೆ ಅಂಧ ದಾರಿಹೋಕರು ಇದ್ದರೂ ಇರಬಹುದೆಂಬ ಒಣ ಆಸೆ!            ಇದೆಲ್ಲ ಇದ್ದರೂ ಇರಬಹುದು.. ಅವರವರ ಮನದಂಗಳದಲ್ಲಿ ಮನೆಮಾಡಿದ ಭಾವನೆಗಳ ನೋಡಿ ದವರಾರು?            ನನ್ನ ಕಥ...

ಮೌನಿ

Image
             ಹೇಳಬೇಕೆಂದರೆ ವ್ಯತ್ಯಾಸವಿಷ್ಟೇ!ಆತನೊಬ್ಬ ನದಿ.ನಾನೊಂದು ಶರಧಿ!ಆತನಿಂದ ಹೇಳಿದ್ದಕ್ಕೂ, ನೀಡಿ ದಕ್ಕೂ ಪ್ರತ್ಯುತ್ತರ ಹಾಗೂ ಸ್ಪಂದನ ಬರುವುದು ಊಹಿಸಲಸಾಧ್ಯವಾದ ಪ್ರಕ್ರಿಯೆ!ಮಂದರೀತಿಯ ಹರಿವು ಅವನದ್ದು!             ಆದರೆ ನಾನೊಂದು ಭೋರ್ಗರೆವ ಶರಧಿ! ಯಾವಾಗಲೂ ಜೀವಂತ! ಸ್ಪಂದನೆ - ಭಾವನೆಗಳು ತುಸು ಹೆಚ್ಚೇ!ಆತನ ಗತಿಗೆ ಹೊಂದಿಕೊಳ್ಳಲು ಅಸಾಧ್ಯವಾದ ಬರತ!ಆದರೂ  ಶರಧಿ ನಾನು! ಆತನೆಂದು ಸೇರುವನೆಂದು ಬರಕಾಯುವ ಬೆಕ್ಕಸ ಕಣ್ಣ ಬೆಡಗಿ!              ಚಿಕ್ಕವರಿರುವಾಗ ಜಾತ್ರೆಯಲ್ಲಿ ಕಣ್ಣಿಗೆ ಚಂದವೆನಿಸಿದ್ದೆಲ್ಲ ಬೇಕು!ಅಮ್ಮನ ಕಿರುಬೆರಳು ಹಿಡಿದು ನಿಂತಿದ್ದು ಸುಳ್ಳಲ್ಲ! ಕಣ್ಣಂಚಿನಲ್ಲಿ ನೀರು ಜಿನುಗಿದರೂ ಅಮ್ಮ ಎಲ್ಲಿ ಅದನ್ನು ಕೊಡಿಸುವಳೋ ಎಂಬ ಪುಟ್ಟ ಆಸೆ! ಆದರೆ ಅಮ್ಮ ಕಣ್ಣು ಕಟ್ಟುವ ವಿದ್ಯೆಯಲ್ಲಿ ಪರಿಣಿತೆ ! ಚೆಂದನೆಯ ಮಾತಿನಲ್ಲಿ ಮನಾಯಿಸಿದಳು! ಇಂದು ಆ ಜಾಗದಲ್ಲಿ ಇರುವವ ಆತ! ಆತನ ಬಗೆಯ ಪ್ರೀತಿಯೇ ಅಂದಿನ ಬಾಲ್ಯದ ಆ ಆಟಿಕೆಗಳು! ಒಲವಂಗಡಿಯ ಮಾಲೀಕನೂ ಆತನೇ... ವಿರಹದಂಗಡಿ ಒಡೆಯನೂ ಅವನೇ ! ಎಲ್ಲವ ಹೇಳಿ ಮತ್ತೇನೋ ಕೇಳುವ ಬಯಕೆಯನ್ನು ಮರೆಸುವವನು ಅವನೇ !              ಆತ ಕಡು ಮೌನಿ ! ಮಾತನ್ನರಸಿ ಹೋದವಳಿಗೆ ಸಿಕ್ಕಿದ್ದು ಮೌ...

ಸಮಾನಾಂತರ ಜಗತ್ತು

Image
ಒಮ್ಮೆ ನಿಲ್ಲೋಣ!ನಾಲ್ಕು ಹೆಜ್ಜೆ ಹಿಂದೆ ಹೋಗಿ ಮತ್ತೊಮ್ಮೆ ಪರಿಶೀಲಿಸಿದಾಗ ಗೋಚರವಾದ ಅವಿತಿದ್ದ ಸತ್ಯವೆಂದರೆ ನಮ್ಮಯ ಪ್ರಪಂಚಗಳು ಬೇರೆಯೆಂದು!                   ಎಂದಿಗಾದರೂ ಹೊಸ ಪರಿಚಯವಾದಾಗ ಮನಸ್ಸು ಬಯಸುವುದು,ಮಾಡುವುದು ನೀರ ಮೇಲಿನ ಗುಳ್ಳೆ ಯಂತಹ ನಾಳಿನ ಭಗ್ನ ಕಲ್ಪನೆಗಳ!ಒಂದು ಕ್ಷಣ ಯೋಚಿಸ ಬೇಕಾದುದು "ಅವರ" ಅಸ್ತಿತ್ವವೇ ಇಲ್ಲದ ಪೂರ್ವವ!               ಹಾ ,ಹೌದು!ಅವರಿಲ್ಲದ ಒಂದು ಜಗತ್ತ್ತುಇತ್ತು. ನಾವಿಲ್ಲದ ಅವರ ಜಗತ್ತೂ ಇತ್ತು.ಬೇರೆಡೆಗೆ..ಅವರೊಳಗೆ ಹಾಗೂ ನಮ್ಮೊಳಗೆ..ಖುಷಿ,ದುಃಖ,ಸಹನೆ ಎಲ್ಲವೂ ಹಾಸು ಹೊಕ್ಕಿತ್ತು.. ಎಲ್ಲರೊಳಗೂ.. ಎಲ್ಲೆಲ್ಲಿಯೂ.. ಆದರೂ ಬದುಕು ಸಾಗುತ್ತಿತ್ತು..ಸಮಾನಾಂತರವಾಗಿ...ಗತಿ ಸ್ಥಿತಿ ಬೇರೆಯೇ ಇದ್ದರೂ ಹಗಲು,ರಾತ್ರಿ ನಿನ್ನೆ ನಾಳೆಗಳು ಮತ್ತದೇ ಸಮಾನಾಂತರ ರೇಖೆಯಲ್ಲಿ ಸಾಗುತ್ತಿತ್ತು!                 ಬಹುಶಃ ಇವೆಲ್ಲದರ ಪರಿಚಯವಿಲ್ಲದ ವಿಧಿಯೊಂದು ಆ ಜಗತ್ತುಗಳ ಒಂದು ಮಾಡಲು ಯತ್ನಿಸುತ್ತಿತ್ತು!ಆದರೆ ಸಮಾನಾಂತರ ರೇಖೆಗಳು ಕೂಡಬಲ್ಲವೆ ಎಂದಿಗಾದರೂ?                   ಪ್ರಸ್ತುತಕ್ಕೆ ಬಂದರೆ ಇವೆಲ್ಲವ ನಾವೆಂದಾದರೂ ಪರಿಗಣಿಸಿದ್ದೇವಾ ಎಂಬ ಪ್ರಶ್ನೆ ಕ್ಷಣ ಕ್ಷಣಕ್ಕೂ ಕ...

ಮರಗೆಟ್ಟಿದ ಮನಸ್ಸು!

Image
ಬರದ ಕ್ಷಣಗಳ ಭ್ರಮೆಯಲ್ಲಿ ಕಳೆದು ಹೋದ ಅವಳನ್ನು ಶೀತಗಾಳಿ ಸೋಕಿ ಎಚ್ಚರಿಸಿತು...                 ಹದಗೆಟ್ಟ ದೇಹದ ಆರೋಗ್ಯವ ನಿರ್ಲಕ್ಷಿಸಿ ಎಂದೂ ಗುಣಮುಖವಾಗದ ಮನಸ್ಸಿಗೆ ತಾತ್ಕಾಲಿಕ ಮದ್ದನ್ನರಸಿ ಹೋದಳಂತೆ!                 ಅಲ್ಲಿದುದು ಕೊರೆವ ಚಳಿ,ಕಾಡುವ ಮೌನ,ಬರದ ಆತನ ಉತ್ತರದ ಎದುರು ನೋಡುವಿಕೆ!                 ಆತನಿಲ್ಲದ ಜಗವೇ ತನ್ನಂಗಳವೆಂದು ದಿನ - ದಿನವೂ ಅಲೆದಾಡುವ ಆಕೆಗೆ ಅದೇನು ದೊಡ್ಡ ನೋವಾಗಿರಲಿಲ್ಲ!ಆದರೂ ಕ್ಷೀಣಿಸುತ್ತಿರವ ದೇಹವೊಂದು ಕೇಳಬೇಕಲ್ಲ!                 ಕಣ್ಣುಗಳು ಸದಾ ಬೀಳುತ್ತಿದ್ದ  ಹಿಮಪಾತವ ನ್ನು ಬಿಟ್ಟು ಬೇರೇನನ್ನೂ ನೋಡುತ್ತಿರಲಿಲ್ಲ! ಆದರೂ ಅವಳ ಮನಸ್ಸು ಇನ್ನೇನನ್ನೋ ಹೇಳುತ್ತಿತ್ತು, ಬಯಸುತ್ತಿತ್ತು!                 ಆತನ ಪ್ರತಿ ಅವಳ ಪ್ರೀತಿ ಹಿನಪರ್ವತದಂತೆ ಅಚಲ..ಅಲ್ಲಿ ಸೂರ್ಯರಶ್ಮಿ ಎಂದರೆ ಆತನ ಒಂದು ಮಾತು!ಆದರೆ ನೇಸರನಿಗೆಂದು ಪುರುಸೊತ್ತೊ?ಅವಳ ಒಂದೇ  ಆಸೆ ಕೆಲವೊಮ್ಮೆ ಮರೆತುಬಿಡುವನು ಎಂಬ ಬಯಕೆ ಸುಳ್ಳಾಗಲಿ ಎಂಬುದು..                 ಆಕೆಯ ಕಣ್ಣುಗಳ...

ತಪ್ಪಾ? ಕಲಿಕೆಯಾ?

Image
                  ಜೀವನದ ಓಟದಲ್ಲಿ ಎಲ್ಲರೂ ತಪ್ಪಿತಸ್ತ ರೇ! ನಿತ್ತು ನೋಡುವ ಜಾಗವಷ್ಟೇ ಬೇರೆ! ಆದರೂ ತಪ್ಪಿನ ವರ್ಗೀಕರಣವೊಂದೆ!                   ಹೊಳೆಯ ನೀರಿನಂತೆ ಹರಿದು ಹೋಗಲಸಾಧ್ಯವಾದ ಪ್ರೀತಿಯೆಂಬುದು ಮನಸ್ಸೆಂಬ ಕೆರೆಯ ನೀರಂತೆ - ಸ್ತಬ್ಧ!  ಸಮಯವನ್ನೇ ತನ್ನಡಿಯಾಳಾಗಿ ಮಾಡುವ ಮಾಯಾಜಾಲ!ಮುಂದಿನ ಪರಿಣಾಮಗಳ ವಿಶ್ಲೇಷಿಸುವಲ್ಲಿ ಮರಗೆಟ್ಟಿದ ಮನಸ್ಸು! ಆಕರ್ಷಣಾ ಹಠದ ಸರಪಳಿಯೊಂದು ಮುಗ್ಧ ಮನಗಳ ಬಂದಿಸಿ ಕೀಲಿ ಕೈಯನ್ನು ಬೇಕೆಂದೇ ಅಡಗಿಸಿಟ್ಟ ಪರಿ!                    ನಿರ್ಮಲ ಪ್ರೀತಿಗೆ ಗೀಳೆಂಬ ತುಕ್ಕು ಹಿಡಿದು ಬಂದ ಧ್ಯೇಯ ಮರೆತಾಗ ಮನಸ್ಸು ಗಳೆರಡು ಮುಮ್ಮಲ ಮರಗಿತಂತೆ... ಎಂದೂ ಹಿಂದಿರುಗಲಾಗದ ಗತಕಾಲಕ್ಕೂ ಸೇರದೇ ಇತ್ತ ಇರದ ಮನಸ್ಸಿನಿಂದ ಭವಿಷ್ಯಕ್ಕೂ ಹೋಗದೇ ಅನಾಥವಾಗಿ ರೋದನೆಯಿಡುತ್ತಿರುವುದು ವಿಶಾಲ ಅಂಗಳದಂತಿರುವ ಖಾಲಿ ಮನಸ್ಸು!                    ಹೊರಜಗತ್ತಿಗೆ ಮೂಳೆ ಅಸ್ಥಿಮಜ್ಜೆಗಳಿಂದ ಚಂದನೆಯ ರೂಪ ಪಡೆದ ಮನುಷ್ಯನು ಒಳಗಡೆ ಭಾವನೆಯೆಂಬ  ಛಾವಣಿಯಿಲ್ಲದ ಮುರುಕು ಮನೆಯಂತೆ!ನಗುವಿನ ಮುಖವಾಡವ  ಹೊತ್ತು ಕಾಳಸಂತೆಯಲ್ಲಿ ತಿರುಗುವುದು ದಿನಚರಿಯಾಗ...

ನಾಗರಚುಂಬನ 💔

Image
ಖಾಲಿತನದಗ್ನಿಯಲ್ಲಿ ಬೆಂದು ಸಾಯುತ್ತಿದವನಿಗೆ ಪ್ರೀತಿಯ ಸಹಾಯಹಸ್ತ ನೀಡಿದರಂತೆ!ಆದರೆ ಮರುಳ ಆತ..ಸುಖಕ್ಕೊಂದು ದುಃಖದ ನೆರಳಿರುವುದನ್ನು ಮರೆತೇ ಬಿಟ್ಟಿದ್ದ..ಕ್ಷಣಿಕ ಸುಖಕ್ಕೆ ನಾಂದಿಹಾಡಿ ತಾಳ್ಮೆಯ ಬಲಿ ಅರ್ಪಿಸಿಯೇ ಬಿಟ್ಟಿದ್ದ!                ಜೀವ ಉಳಿಸುವ ಅಮೃತ ಅತಿಯಾದರೆ ವಿಷವೆಂದು ಅಮೃತಪಾನದ ಮತ್ತೇರಿದವರಿಗೆಂದು ತಿಳಿ ಯದು..ಪ್ರೀತಿಯೆಂಬುದು ಹಾಗೇ.. ಮಂದಗತಿಯ ವಿಷ! ನಮಗರಿವಿಲ್ಲದಂತೆ ನಮ್ಮನ್ನು ಶರಣಾಗಿಸಿಕುಳ್ಳುವ ಸುಂದರ ಕಲ್ಪನೆಯ ಜೈಲು!ಆ ಜೈಲೂ ಕೂಡ ಅರಮನೆಯೇ!                 ಮೋಹದ ಮತ್ತು ಮಸ್ತಕಕ್ಕೆರಿದಾಗ ಸುಳ್ಳೆಂಬ ಸರ್ಪವ ಬರಸೆಳೆದರಂತೆ!ಅದರೊಡನೆ ಕಾಳರತ್ರಿಯಲ್ಲಿ ಕಾದಾಟ!ಬಿಡಿಸಲಾಗದ ಕಣ್ಣಪರ ದೆಯೊಂದು ಕಟ್ಟಿದಾಗ ವಿಷವೇರಿದ ನಾಗನ ಬಿಗಿದಪ್ಪಿ ಚುಂಬಿಸಿದರಂತೆ!ಆಗ ಅದು ಜೀವ ಉಳಿಸುವ ಮದ್ದೋ ಅಥವಾ ಜೀವ ತೆಗೆಯುವ ವಿಷವೋ!                 ಕೂಲಂಕುಷವಾಗಿ ನೋಡಿದರೆ ಎರಡೂ ಸರಿಯೇ!ಸಿಕ್ಕಾಗ ಬಿಗಿದಪ್ಪದೇ ಜೀವನಪೂರ್ತಿ ಅನುಭವಿಸುವ ವೇದನೆ ಒಂದು ಕಡೆಯಾದರೆ, ಸಿಕ್ಕಿದ್ದನ್ನು ಎದೆಗಪ್ಪಿ ಮೋಹದಲ್ಲಿ  ಚಿರಂಜೀವಿಯಾಗುವುದು ಇನ್ನೊಂದು ಕಡೆ!               ಅದೂ ಸರಿ,ಇದೂ ಸರಿ!ಈ ತೀರ್ಮಾನಕ್ಕೆ ಬಂದು ತಲುಪುವಲ್...

ಉದ್ದೇಶಿತ ನಾಮಕರಣ!

Image
                  ಕೆಲವೊಂದು ಆಕರ್ಷಣೆಗಳೇ ಹಾಗೇ!ಮನದಾಳದಲ್ಲಿ ಸುನಾಮಿ ಉಂಟುಮಾಡಿ ಮೌನಧ್ಯಾನಕ್ಕೆ ಶರಣಾಗುತ್ತವೆ! ಆದರೂ ಕಣ್ಣಿಗೆ ಹಿತವೆನಿಸಿದ್ದೆಲ್ಲ ಬೇಕು!ಬಹುಪಾಲು ಹಠ ಉಸಿರ ಕಟ್ಟಿಸಿ ತಾನೇ ಮೇಲುಗೈ ಸಾಧಿಸಿ ಆಕರ್ಷಣೆಗೆ ಹೊಸ ಹೆಸರಿಡುವ ಉದ್ದೇಶಕ್ಕೆ ಅಣಿ ಮಾಡುತ್ತದೆ! ಅದೇ ಉದ್ದೇಶಿತ ನಾಮಕರಣ..                 ವಸ್ತುಗಳನ್ನಾಗಲಿ,ಮನುಷ್ಯರನ್ನಾಗಲಿ ಕಳೆದುಕೊಳ್ಳುವ ಹಂತದಲ್ಲಿ ಇರದ ಮನಸ್ಸು ತಿಳಿ ಪರದೆಯಂತೆ ಸೂಕ್ಷ್ಮ! ಭಾವನೆಗಳ ಕೊಂದು ಕೊಂಡಾದರೂ ಸೈ,ಒಲವನ್ನು ಜಯದ ದಡವ ತಲುಪಿಸುವ ಪುಟ್ಟ ಯತ್ನ! ಈ ಯತ್ನದಲ್ಲಿ ಕೊಂಡಿಗಳೆಂದರೆ ಒಲವ ಒಡೆಯ/ಒಡತಿಯರು!ಅವರನ್ನು ಕಳೆದುಕೊಳ್ಳಲು ಎಂದಿಗೂ ಸಿದ್ದರಲ್ಲದ ನಾವುಗಳು.. ಓಡೋ ಸಮಯದ ಮೇಲೆ ಅದೇನೋ ಹುಚ್ಚು ಭರವಸೆ!ಬಹುಪಾಲು ನಾಳೆ ಯಾದರೂ ದೊರಕಬಹುದೋ ಎಂಬ ಹುಳಿ ದ್ರಾಕ್ಷಿ ಯಂತಹ ಗುರಿ!        ಆದರೂ ಯತ್ನ ನಿರಂತರ..ಅವರುಗಳ ಮನವೆಂಬ ಆಗಸ ತಲುಪಲು ಹತ್ತದ ಏಣಿಗಳಿಲ್ಲ!ಇದರರಿವು ಆಗ ತಾನೇ ಪ್ರೇಮದಲ್ಲಿ ಬಿದ್ದಿರುವವರಿಗೆ ಹೊಸದೇನಲ್ಲ!ಸಂಬಂಧಗಳ ಉಳಿಸಲು ಮನಸ್ಸಿಗೆ ಮಸಿಯ ಲೇಪನ!            ಏನೆಂದು ಬಣ್ಣಿಸಲಿ ಈ ಬಂಧವ ಎಂದು ತಡಕಾಡುವಾಗ ಉದ್ದೇಶಪೂರ್ವಕವಾಗಿ ಭ್ರಮೆಯ ನಾಮಕರಣ ವೊಂದು ನಡೆದೆಹೋಗುತ್ತದೆ!ಈ ಭ...

ರಾತ್ರಿಯೆಂಬ ಶಾಪ 💔

Image
ರಾತ್ರಿ ನಿಶ್ಯಬ್ಧ- ಶೀತ - ನೆಮ್ಮದಿಯ ಸಮಾನಾರ್ಥಕ ಎಂಬುದು ಲೋಕಾರೂಢಿ! ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡಲು ಎದುರು ನೋಡುವ ಪರ್ವಕಾಲ!ಆದರೆ ಹೃದಯದಾಳದಲ್ಲಿ ಸ್ಮಶಾನವೊಂದು ಮನೆಮಾಡಿ ಕೇಕೆ ಹಾಕುವಾಗ ರಾತ್ರಿ ಒಂದು ಸುಂದರ ಶಾಪ! ದಿನಪೂರ್ತಿ ಕೆಲಸ - ಕಾರ್ಯಗಳಲ್ಲಿ ಮಗ್ನನಾದ ಆತನು ತನ್ನ ಮನಸ್ಸನ್ನು ಮೂಲೆಯಲ್ಲಿ ಕೈಕಟ್ಟಿ ಕುಳಿಸುತ್ತಾನೆ!ಬಹುಶಃ ಅದೇ ಸಿಟ್ಟು,ದ್ವೇಷ,ಅಸಹನೆ,ಅಭದ್ರತೆ ಆ ಮನಸ್ಸಿಗೆ!ಅದರ ಅಪರಿಮಿತೆಯ ಅದೇ ಬಲ್ಲದು!ರಾತ್ರಿ ಯಾದೊಡೆ ಮನಸ್ಸಿನ ಹಗೆ ಅದೇ ಮನಸ್ಸ ಮೇಲೆ! ಎಂದೂ ನಿಲ್ಲದ ಸಮರಸ. ನಿದ್ರೆ ಎಲ್ಲದಕ್ಕೂ ಮದ್ದಂತೆ!ನೋವ ಮರೆಸಲು!ಆದರೆ ದ್ವೇಷಕ್ಕೆ ನಿದ್ರೆಯ ಮೇಲೆ ಮತ್ಸರವಂತೆ! ಏಕೆಂದರೆ ಕೊನೆಗೂ ತಾನೆಲ್ಲಿ ಅನಾಥನಾಗುವೆನೆಂಬ ಮತ್ತದೇ ಅಭದ್ರತೆ! ಆದರೂ ಮನಸ್ಸು ನಿದ್ರೆಯನ್ನು ದೇಹದ ಚೌಕಟ್ಟಿನಲ್ಲಿ ನಿಲ್ಲಿಸಿ ಮೇಲುಗೈ ಸಾಧಿಸಿಯೇ ಬಿಡ್ತು!ಮನಸ್ಸೊಂದು ಮೂರು ವರ್ಷದ ಮಗುವೆಂದರೆ ತಪ್ಪಾಗಲಿಕ್ಕಿಲ್ಲ! ದುಃಖ, ಸುಖ ಎರಡನ್ನೂ ಅದ್ಧೂರಿಯಾಗೇ ವ್ಯಕ್ತಪಡಿಸುತ್ತೆ! ಕಾರಣ ದಿನವಿಡೀ ಸುಮ್ಮನೆ ಕುಳಿತ ಸಿಹಿಯಾದ ಸಿಟ್ಟು!ಆದರೂ ದುಃಖವನ್ನು ತುಸು ಚೆನ್ನಾಗಿಯೇ ಅವಿರತಗೊಳಿಸುವ ಕಲೆ! ಮನಸ್ಸು ದಿನಚರಿಯಂತೆ!ಇಂದಿನ ದಿನದ ಆರಂಭಕ್ಕೆ  ನಿನ್ನೆಯೂ ಬೇಕು,ಬರದ ನಾಳೆಯೂ ಬೇಕು. ಆದರೂ ರಾತ್ರಿಯ ಮೌನದಲ್ಲಿ ಮನದ ಗೋಡೆಗಳಲ್ಲಿ ಪ್ರತಿದ್ವನಿಸುವುದು ಕಳೆದ ದಿನಗಳ ದುರಂತ ಹಾಗೂ ಅರಿಯದ ನಾಳೆಗಳ ಆತಂಕ! ಕಿವಿಗಚ್ಚುವ ಜಗದ ಗಲಾಟೆಗಳ...

some- ಭಾಷಣೆ!

Image
 ಆತನ ಮೌನವೇ ಎಲ್ಲವ ಕೆರಳಿಸುವುದು! ಅಂತಹದ್ದೇನಿರಬಹುದು ಆತನ ಶಬ್ದಗಳಲ್ಲಿ?ಇದಕ್ಕೆ ಉತ್ತರ ಬಲ್ಲವಳು ನಾನಲ್ಲ.ಉತ್ತರ - ವಿವರಣೆ - ವಿಶ್ಲೇಷಣೆ ಎಲ್ಲವೂ ಆತನೇ...ಆತನೊಬ್ಬ ಮಳೆಗಾಲದ ಸೂರ್ಯ.ಮಾತು ಕಮ್ಮಿ,ಮೌನದ ಸಂವಾದವೇ ಹೆಚ್ಚು!ಪುಟ್ಟ ಪುಟ್ಟ ಮುತ್ತುಗಳಂತೆ ಪೋಣಿಸಿರುವ ತುಂಡರಿಸಿದ ಸಂದೇಶಗಳು!ಕೆಲವೊಮ್ಮೆ ಎಲ್ಲ ಪ್ರಶ್ನೆಗಳಿಗೂ ಎರಡೇ ಬಗೆಯ ಉತ್ತರಗಳು ಲಭ್ಯ! ಒಂದೋ ಸ್ತಬ್ಧ ನಗು,ಇಲ್ಲವಾದಲ್ಲಿ ಕಡುರಾತ್ರಿಯ ಭೀಕರ ಮೌನ!ಆದರೆ ಕಾಣೆಯಾದ ತಾಳ್ಮೆಯ ತರಬೇತಿ ಯಂತು ಚೆನ್ನಾಗೇ ನಡೆಯುತ್ತಿದೆ! ದಿನವಿಡೀ ಮನದಲ್ಲಿ ಚಿತ್ರೀಕರಿಸಿದ ಕಂತುಗಳನ್ನು ಸಿಗುವ ಬೊಗಸೆಯಷ್ಟು ಐದು ನಿಮಿಷದ ಅವಧಿಯಲ್ಲಿ ಭಟ್ಟಿ ಇಳಿಸುವ ಕಾರ್ಯವಿನ್ನು ನಿಂತ ಕಾಮಗಾರಿಯಾಗಿದೆ!  ಮೌನಕ್ಕೇ ನಾದರೂ ರೂಪ ವಿದ್ದರೆ ಅದು ಬಹುಶಃ ಆತನ ಸಂದೇಶಗಳಲ್ಲಿ ಕಾಣುತಿತ್ತು! ಆದರೂ ಆಡುವ ನಾಲಕ್ಕು ಮಾತುಗಳು ತೂಕಭರಿತ- ಅರ್ಥಗರ್ಭಿತ!(ಹೆತ್ತಮ್ಮಗೆ ಹೆಗ್ಗಣ ಮುದ್ದು ಎಂಬ ಗಾದೆಯ ಪ್ರಭಾವ ವೇನೋ😅) ಒಮ್ಮೊಮ್ಮೆ ಈ ಮೌನದ ಕೋಟೆಯ ಗೋಡೆಗಳ ಒಡೆದು ಹಾಕುವ ಹೆಬ್ಬಯಕೆ! ಆದರೇನೋ ಅಳುಕು! ಆತನು ಬಹುಶಃ ಚಂದ್ರನಂತೆ ಪಕ್ಷ - ಪಾಲಕ! ವಾರಾಂತ್ಯ ದಲ್ಲಿ ಆತನಲ್ಲಿ ಅಡಗಿರುವ ಮೂಕ ನಿಗೊಂದು ರಜೆ! ವಾರಾಂತ್ಯ ಕ್ಕೆಂದು ದಿನಗಳು ಬೇಗ ಕಳೆಯಲಿ ಎಂಬ ಕೋರಿಕೆ ಬಂದದ್ದಂತು ಸುಳ್ಳಲ್ಲ! ಪ್ರತಿ ಸಲವೂ ಅದೇ  ನಾಲಕ್ಕು ಸಂದೇಶ ಗಳನ್ನು ಪುನಃ - ಪುನಃ ಓದಿ ಕಾಣದ ಸತ್ಯವ ಹುಡುಕುವ ಪ್ರಯತ್ನ ನಿ...

ತಿರುಗಿ ಮತ್ತದೇ ಕಥೆಯೇ??

Image
ಅಂದು ಆಕೆ ಗೊಂದಲದ ಗೂಡಾಗಿದ್ದಳು. ಜನುಮದಿನವೆಂದು ಸಂತಸ ಪಡಲೋ ಇಲ್ಲಾ ಜವಾಬ್ದಾರಿ,ಪ್ರಭುತ್ವಕ್ಕೆ ಮನಸ್ಸಿಲ್ಲದೆ ಹೆಗಲುಕೊಡಲೋ ಎಂಬ ದ್ವಂದ್ವದಲ್ಲಿ! ಆದರೂ ವರುಷಪೂರ್ತಿ ಮಾತನಾಡದ ಗೆಳತಿಯರು ಅದೊಂದು ದಿನ ತೋರಿಕೆಯ ಹಾರೈಕೆಗಳ ಮಹಾಪೂರ ವ ತಂದೊಯ್ಯುವ ಅಂದಾಜು ಇತ್ತು! ಮೊದಲೇ ೨೨ ಆಗುವ ಸಂಬ್ರಮ!ಹಿಂದಿನಿಂದ ಓದಿದರು ಒಂದೇ!ಮುಂದಿನಿಂದ ಓದಿದರೂ ಒಂದೇ! ಅದರರ್ಥ ಹಿಂದಿನ ದೆಲ್ಲ ಮರುಕಳಿಸಲಿ ಎಂದೇನೂ ವಿಧಿಲಿಖಿತ ವಾಗಿರಲಿಲ್ಲ! ಕಾಕತಾಳೀಯ ಅಷ್ಟೇ! ಆಕೆ ೨೧ ರಿಂದ ೨೨ಕ್ಕೇ ಪ್ರಯಾಣ ಮಾಡುತಿದ್ದಳೋ ಹಾಗೇ ಊರಿಂದ ಊರಿಗೆ ಹೊಟ್ಟೆ ಪಾಡಿಗಾಗಿ ಪಯಣ ಸಾಗುತಿತ್ತು! ಅನೀರಿಕ್ಷಿತ ವಾಗಿ ಸಿಕ್ಕಿದ ಗೆಳತಿಯೊಬ್ಬಳು ಆ ದಿನ ವಿಳಾಸ ವಿಲ್ಲದ ಅಂಚೆಯ ತಲುಪಿಸುವ ಅಂಚೆ ಪೇದೆ ಯಾದಳೆಂದರೆ ಬಹುಶಃ ಸುಳ್ಳಾಗಲಿಕ್ಕಿಲ್ಲ! ಹಾಗೆ ನಿದ್ರೆಗೆ(ಭ್ರಮೆ ಎಂಬ ನಿದ್ರೆಗೆ) ಜಾರಿದಾಗ ಅಚಾನಕ್ಕಾಗಿ ಒಂದು ಬಿಂಬ ಕಣ್ಣ ಮುಂದೆ!ದಿನ ದಿನವೂ ಅನೇಕ ಬಿಂಬ ಗಳ ಕಾಣುವ ಕನಸುಗಾತಿಗೆ ಅದೇನು ವಿಶೇಷವಾಗಿರಲಿಲ್ಲ!ಹಠಮಾರಿ ಕನಸುಗಾತಿ! ಆದರೂ ಆ ಬಿಂಬ ತೀಕ್ಷ್ಣ ವಾಗಿತ್ತು!ಸುಡುವ ಜ್ವಾ ಲೆಯಲ್ಲು ಅದರ ಚಂದ ಮನಕ್ಕೆ ತಂಪು ನೀಡುತಿತ್ತು!ವಿಳಾಸ ವಿಲ್ಲದ ಅಂಚೆಯೂ ಬಿಂಬವನ್ನೇ ಬೆರಳು ಮಾಡಿ ತಿಳಿ ಹೇಳುತಿತ್ತು!ಆಕೆ ನಾಲ್ಕು ಹೆಜ್ಜೆ ಮುಂದೆ ಹೋಗಿ ಬಿಂಬವನ್ನು ನೋಡಿದಾಗ ಆಕೆ ಇನ್ನಷ್ಟು ಗೊಂದಲ ಗೊಂಡಿದ್ದು ಸುಳ್ಳಲ್ಲ!ಆಕೆಯ ಕಲ್ಪನೆಯ ಪ್ರತಿರೂಪ ದಂತಿತ್ತು ಆ ಬಿಂಬ! ಆಯ ಕಟ್ಟಿನ ದೇಹ!ಮಿ...

ಏಕೆ ಹೀಗೆ?

Image
1.ಎಲ್ಲವನ್ನೂ ಮುಕ್ತವಾಗಿ ಹೇಳಲು ಪ್ರೀತಿಯೇ ಮುಗಿದಿರುವಾಗ ಮತ್ತೊಂದು ಮಾತು ಮನದ ಕಿಟಕಿ ಯಿಂದ ಇಣುಕಿ ನೋಡಿತಂತೆ! 2. ಗತಕಾಲ ದಿಂದ ಹುದುಗಿರುವ ಭಾವನೆಗಳ ಬಡಿದೆಬ್ಬಿಸುವವ ನೀನೆಂದು ಮನಕ್ಕೆ ತಿಳಿದಿದೆ! ಆದರೆ ಹೇಗೆ ಹೇಳಲಿ ನಾ ನಿನಗೆ? 3.ಮನದಾಳದಲ್ಲಿಯ ನಾಚಿಕೆಯೆಂಬ  ಆಣೆಕಟ್ಟ ದಾಟಿ ಬರುವ ಧಾವಂತವಂತೆ, ಗುರಿಯಿಲ್ಲದ ಗೊಂದಲ ಭಾವನೆಗಳಿಗೆ ! 4.ಉತ್ತರವಿಲ್ಲದ ಪ್ರಶ್ನೆ - ನಿನ್ನ ಪ್ರೇಮ! ಉತ್ತರ ಹುಡುಕ ಹೊರಟಾಗ ಮತ್ತೆ ಬಂದು ತಲುಪಿದ್ದು ಶುರು ಮಾಡಿದ ಶೂನ್ಯಕ್ಕೆ! 5. ನಿನ್ನಯ ನಿನ್ನೆಗಳೆಂಬ ಕನವರಿಕೆಗಳೊಂದು ನಾಳೆಯೆಂಬ ಮರೀಚಿಕೆ! 6.ಭಾವನೆಗಳ ಬಡಿದೆಬ್ಬಿಸಿ ಮರೆಯಾದೆ ನೀನು, ಆದರೆ ನೀನಿಲ್ಲದ ಮನವು ಜೀವಂತ ಶವದಂತೆ! 7.ಆತನ ಸವಿಯಿಸಿರ ಸೆರೆಯ ತಪ್ಪಿಸಲು  ತನಗೆ ತಾನೇ ಮನವಳೆದುಕೊಂಡ ಬೆಂಕಿಯ ಬೆಂಗಾವಲು! 8. ಸುಪ್ತಮನದ ಕದ ತಟ್ಟಿದೆ ನೀನು! ಬಾಗಿಲಿಗೆ ಬರುವಷ್ಟರಲ್ಲಿ ನೀನೊಂದು ಕಲ್ಪನೆಎಂದು ಅರಿವಾಯಿತು! ಆದರೆ ಏನು ಮಾಡಲಿ!ನನ್ನ ಮನಸ್ಸಿನ ತುಂಬ ನೀನೇ ಆವಸಿರುವೆ! 9.ಮೌನ ಕೋಟೆಯೊಳಡಗಿತ್ತು ರೆಕ್ಕೆಯಿಲ್ಲದ ಚಿಂತೆಗಳು! ಕಟ್ಟೊಡೆದು ಧುಮ್ಮಿಕ್ಕ ಲೋ ಎಂಬ ಅಂತೆಕಂತೆಗಳು! 10.ವಿರಹವ ಪರಿಚಯಿಸಿದ ನೀನು, ನನ್ನ ಪರಿಚಿತನಾಗುವ ಕಾಲವ ಹೇಳಿಬಿಡು! ತಾಳ ತಪ್ಪಿದ ಮನವು ತಾಳ್ಮೆ ಕಳೆದುಕೊಂಡಿದೆ! ಆದರೂ ಸುಪ್ತ ಮನ ಹೇಳುತ್ತಿದೆ ಕಾಯಿ ಗೆಳತಿ! ಈ ವಿರಹವು ಸುಖವೇ! 11. ಸ್ವಾಭಿಮಾನ,ಭ್ರಮೆ, ಕೀಳರಿಮೆಗಳ ಮಧ್ಯೆ ಬರಡಾದುದು ಪ್ರೀತ...

ಪಾಪಿ ದಿಲ್

Image
1.ನನ್ನಲ್ಲಿ ದಫನ ವಾಗಿರುವ ಭಾವನೆಗಳು ಅನಾಥ ವಾಗಿರುವಾಗ ಕಾರಣವರಿಯದೆಂಬ ಜಾಣ ಕುರುಡು ನಿನ್ನದು! ಕನಸು ಕಂಗಳ ಭಾವನೆಗಳು ಸೇರಲು ತೀರವಿದ್ದರೂ ಸೇರಲಾಗದೆ ಕಾದು ಬರಡಾಗಿವೆ! 2.ಪ್ರಯತ್ನಿಸಿದ ಪ್ರಣಯದ ಪರಿತಾಪವಿಲ್ಲ ತರತರವಾಗಿ ಬೇಡಿದರು ಒಪ್ಪುವವ ನೀನಲ್ಲ! ಅಳಿಸಲಾಗದ ಹೆಜ್ಜೆಗುರುತನಿಟ್ಟು ಮಾಯವಾದೆ! ಆದರೂ ನೀನೆಂದು ಹಿಂದಿರುಗದ ಬಾಗಿಲ ಹೊಸ್ತಿಲಲ್ಲಿ ಕಾಯುತ್ತಿರುವೆ ನಾನು❤️ 3.ಹೇಳಬಯಸದೆ ಹೇಳದ , ಹೇಳಿಯೂ ತಿಳಿಯದ ಮುಗ್ಧ ವೇದನೆ ~ ಪ್ರೇಮ! 4.ಬರೆದಷ್ಟು ಮುಗಿಯದ ಕವನಕ್ಕೆ ಮಾತಿಗೊಂದು ಆಸ್ಪದವ ಮೌನವೊಂದು ನಿರಾಕರಿಸುತಿತ್ತು! 5.ಅದೆಷ್ಟು ಆಳವೋ ನಾ ಕಾಣೆ ಇನ್ನೆಷ್ಟು ಗೋಜಲೋ ನಾನರಿಯೆ! ಆದರೂ ಇನ್ನೆನನೋ ನೋಡುವ ತವಕ! ಪ್ರಯತ್ನಕ್ಕೊಂದು ಫಲ ಸಿಕ್ಕೀತೇ? 6.ಉತ್ತರವಿಲ್ಲದ ಪ್ರಶ್ನೆಗೆ ಎಂದಿಗಾದರೂ ಅಂತ್ಯ  ಸಿಕ್ಕೀತೇ ಎಂಬ   ಪ್ರಶ್ನೆಯಲ್ಲಿ ಉತ್ತರಡಗಿರುವಾಗ ಜಾಣ ಕುರುಡೊಂದು ನೆಮ್ಮದಿಯಿಂದ ನಗುತಿತ್ತು! 7.ನಿನ್ನ ಅರ್ಥೈಸಿಕೊಳ್ಳಲಾಗದ ಅರ್ಥಕ್ಕೊಂದು ಅನರ್ಥವೆಂಬ ನಾಮಕರಣ ಮಾಡುವಾಸೆ!. 8. ಕಂಗಳ ನಡುವಿನ ಒಲವಿನ ಕಾಮಗಾರಿ ಅಪೂರ್ಣವಾಗಿದೆ! ಪ್ರೀತಿ ಎಂದಾದರೂ ಆ ಎಲ್ಲೆ ಮೀರಿ ಪಯಣ ಮುಗಿಸ ಬಹುದೇ? 9. ಮನದಾಳದಲ್ಲಿ ಮನೆಮಾಡಿದ ಮೌನ ಖೈದಿಗೆ  ಮಾತೆಂಬ ಜಗದ ಸ್ಪರ್ಧಿಯಾಗುವಾಸೆ! ಕಿಟಕಿಯ ಸರಳಿನ ಮೂಲಕ ಸೂರ್ಯ ರಶ್ಮಿಗೆ ಮೈಯೊಡ್ಡು ವ ಆತನಿಗೆ ಮಾನವು ಕೈ ಯೆಳೆದು ಕಿವಿಯಲ್ಲಿ ಪಿಸುಗುಟ್ಟಿತು... " ನಾನೇ ಸತ್ಯ, ನಾ...

ವಿರಹ ಮತ್ತು ವ್ಯಾಮೋಹ

Image
1. ಒಮ್ಮೆಯಾದರೂ ನನ್ನ ನಂತರ ನನ್ನ ಮೇಲೆ ಪ್ರೇಮ ವುಂಟಾದರೆ ನಿನ್ನಲಿಯ ಭಾವನೆಗಳ ಹೂಗುಚ್ಚ ವತಂದು ಗೋರಿಯ ಮೇಲಿಡು! ಜಗದ ಕಣ್ಣಿಗೆ ನೆಮ್ಮದಿಯಲ್ಲಿರುವ ನನಗೆ ನೆಮ್ಮದಿ ಸಿಗುವುದು ನಿನ್ನ ಹೂಗುಚ್ಚಗಳಿಂದಲೆ! 2.ಆಕೆಯು ಎಲ್ಲರಂತಿರಲು ಪ್ರಯತ್ನಿಸಿದಳು ಎಲ್ಲರಂತೆ ಆಕೆಯದ್ದು ಮರುಳಾಗುವ ಹುಚ್ಚು ಮನಸ್ಸು! ಹುಚ್ಚು ಹಿದಿಸಿದವ ಹಿಂದಿರುಗಿ ನೋಡಲಿಲ್ಲ! ಸಮಯ ಸಾಗುತಿತ್ತು..ಆದರೆ ಆಕೆಯಿನ್ನು ಅಲ್ಲೇ ನಿಂತಿದ್ದಳು..ಅವನನ್ನು ನೋಡಿದಲ್ಲಿಯೇ! 3. ಅಮಾವಾಸ್ಯೆಯಲ್ಲೂ ಪೌರ್ಣಿಮೆಯನ್ನು ಕಾಣಬಯಸುವ ಚಂದಿರನಲ್ಲಿರುವ ನೂನ್ಯತೆಗಳು ಕಾಣಿಸುತ್ತಿಲ್ಲ! ನಿನ್ನ ಓರೆಕೋರೆಗಳು ಕೂಡ ಸುಂದರ ರೇಖೆಗಳೆ! 4.ಹೋಗಲಿ ಬಿಡು ಎನ್ನುವ ಮನ ಸಮ್ಮತಿಯಿಲ್ಲದ ಹೃದಯದ ಸಾಂತ್ವನ ಒಮ್ಮೆ ಮಾತನಾಡಿಸಿಬಿಡಲ ಎಂಬ ಮಂಥನ ಇವೆಲ್ಲದರ ಮಧ್ಯೆ ಆಕೆಯೊಬ್ಬಳು ದಿಕ್ಕು ತೋಚದೇ ನಿಂತಿದ್ದಳು! 5. ಬಣ್ಣದ ಚಿಟ್ಟೆ ಯಂತೆ ನೀ ಹಾರಿ ಹೋಗಿರುವಾಗ  ಕೈಯ್ಯಲ್ಲಿ ಕೇವಲ ವಿರಹದ ಬಣ್ಣವುಂಟಷ್ಟೆ! 6. ಬಹುಶಃ ನಿನ್ನ ಮೊಂಡುತನವೆ ನಿನ್ನ ಬಗೆಗಿನ ನೆನಪುಗಳ ತಂದ್ಯೊತಿವೆ! ಆದರೂ ಮನಸ್ಸಿನ ಮೂಲೆಯಲ್ಲಿ ಕೂತ ಅಪೂರ್ಣ ವಾದ ನಿನ್ನ ಚಿತ್ರವೊಂದು ಬಾರಿ ಬಾರಿ ಕೆಳುತ್ತ ಲಿತ್ತು..ನಾನು ಪೂರ್ಣನಾಗುವುದು ಯಾವಾಗ ಎಂದು! 7.ಮಸಣದ ಹೂವೊಂದು ಮೂಲೆಯಲ್ಲಿ ಮರಗಿತಂತೆ ಬಯಸಿದ್ದೇನೋ ನಿಜ ನಿನ್ನ ಸಾಮೀಪ್ಯ ವನ್ನ! ಆದರೆ ಸ್ಮಶಾನದಲ್ಲಲ್ಲ ಎಂಬ ಸಂಕೋಚದಿಂದ.. ಕಡು ಮೌನ ವೊಂದು ಆವರಿಸಿತ್ತು ಎಲ್ಲೆಲ್ಲೂ! 8. ಬ...